ಕುಲವಳ್ಳಿಯಲ್ಲಿ ಕೊಲೆ : ಆರೋಪಿಗಳು ಪರಾರಿ - Kittur

ಕುಲವಳ್ಳಿಯಲ್ಲಿ ವ್ಯಕ್ತಿಯ ಕೊಲೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಹೊಡೆದು ಶನಿವಾರ ರಾತ್ರಿ  ಕೊಲೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಎದುರಿಗಿರುವ ಈತನ ಮನೆಯ ಮುಂದೆಯೇ  ಈ  ಘಟನೆ ನಡೆದಿರುವುದರಿಂದ ಗ್ರಾಮದಲ್ಲಿ ಆತಂಕದ   ವಾತಾವರಣ ಸೃಷ್ಟಿಯಾಗಿದೆ.

ಫಕ್ಕೀರಪ್ಪ ಬಸಪ್ಪ ಉಪ್ಪಾರ (45) ಕೊಲೆಯಾದ  ವ್ಯಕ್ತಿ ಎಂದು ಗುರುತಿಸಲಾಗಿದೆ.   ಕೊಲೆಗೆ ಕಾರಣವೇನೆಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.  ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

0/Post a Comment/Comments