ರೂ. 1 ಲಕ್ಷ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾಲೂಕಿನ ಬಸರಕೋಡ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ರೂ 1 ಲಕ್ಷ ದೇಣಿಗೆಯ ಡಿಡಿ ಯನ್ನು ಜಿಲ್ಲಾ ನಿರ್ದೇಶಕ ಪ್ರದೀಪ್ ಜಿ, ಅವರು ಬುಧವಾರ ದೇವಸ್ಥಾನ ಮಂಡಳಿಯವರಿಗೆ ವಿತರಣೆ ಮಾಡಿದರು.
ಯೋಜನಾಧಿಕಾರಿ ಪ್ರಶಾಂತ್ ನಾಯ್ಕ್, ರುದ್ರಪ್ಪ ಸಾಂಡಗಿ, ಫಕ್ಕೀರಪ್ಪ ತಳವಾರ, ಶಕುಂತಲಾ ದೇಸಾಯಿ, ರಾಜೇಂದ್ರ ಕಕ್ಕೇರಿ, ಹಸನ್ ತಡಿ, ದೇವೇಂದ್ರ ಕಮ್ಮಾರ, ಶಾಂತವ್ವ ಗಾಣಿಗ, ಹಾಗೂ ಮೇಲ್ವಿಚಾರಕಿ ನಾಗರತ್ನ, ಸೇವಾಪ್ರತಿನಿಧಿ ರೇಖಾ ಉಪಸ್ಥಿತರಿದ್ದರು.
Post a Comment