ವೀರೇಂದ್ರ ಹೆಗ್ಗಡೆ ಅವರಿಂದ ಧನಸಹಾಯ - kittur


ಗೋಡೆ ಕುಸಿತ: ವೀರೇಂದ್ರ ಹೆಗ್ಗಡೆ ಅವರಿಂದ ಧನಸಹಾಯ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾಲೂಕಿನ ತೇಗೂರ   ಗ್ರಾಮದಲ್ಲಿ ಅತಿವೃಷ್ಟಿಯಿಂದಾಗಿ ಮನೆ ಗೋಡೆ ಕುಸಿದ ಸವಿತಾ ಬೇಟಗಾರ ಫಲಾನುಭವಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ರೂ. 5000 ಧನಸಹಾಯ ಮಾಡಿದ್ದಾರೆ.
ಧರ್ಮಾಧಿಕಾರಿ ಅವರು ನೀಡಿದ್ದ ಸಹಾಯ ಧನದ ಚೆಕ್ ಅನ್ನು ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಅವರು ಮಂಗಳವಾರ ಕುಟುಂಬಕ್ಕೆ ವಿತರಣೆ ಮಾಡಿದರು.


ತಾಲೂಕು ಯೋಜನಾಧಿಕಾರಿ ಪ್ರಶಾಂತ್ ನಾಯ್ಕ್, ತುಕಾರಾಂ ಕುರಬರ,  ಬಸವರಾಜ ಬೆಟಗೇರಿ, ಸಂಜೀವ ಕೋಲಕಾರ, ಮಹೇಶ ಬೇಟಗಾರ, ಹಾಗೂ ಸೇವಾ ಪ್ರತಿನಿಧಿ ಸಂಧ್ಯಾ ಉಪಸ್ಥಿತರಿದ್ದರು.
 

0/Post a Comment/Comments