ಪ್ರತಾಪ್‍ಕುಮಾರಗೆ ಕನ್ನಡ ರತ್ನ ಪ್ರಶಸ್ತಿ - kittur

ಹೋರಾಟಗಾರ ದಿ. ಬಾಬಾಗೌಡರ ಚಿಂತನೆ ಮಾಲಿಕೆ - click...

ಪ್ರತಾಪ್‍ಕುಮಾರ್ ಗೆ ಕನ್ನಡ ರತ್ನ ಪ್ರಶಸ್ತಿ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ  ಕಿತ್ತೂರು: ರಾಯಬಾಗ ತಾಲೂಕಿನ ಬ್ಯಾಕೂಡ್  ಗ್ರಾಮದ  ಕನಕಶ್ರೀ ಪ್ರಕಾಶನ  ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಕನ್ನಡ ರತ್ನ' ಪ್ರಶಸ್ತಿಗೆ ತಾಲೂಕಿನ ಗಿರಿಯಾಲ್ ಕೆಎ ಗ್ರಾಮದ ನಿರೂಪಕ ಹಾಗೂ ಗಾಯಕ ಪ್ರತಾಪ್‍ಕುಮಾರ್ ಭಾಜನರಾಗಿದ್ದಾರೆ. 
ಸಂಸ್ಕøತಿ ಮತ್ತು ಕಲಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಗಮನಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ  ಎಂದು ಸಂಘಟಕರು ತಿಳಿಸಿದ್ದಾರೆ. 
ಧಾರವಾಡದ ರಂಗಾಯಣ ಸಭಾಭವನದಲ್ಲಿ ಸೆ. 28 ರಂದು ನಡೆಯಲಿರುವ ಕನಕ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿ   ಪ್ರದಾನ ಮಾಡಲಾಗುವುದು.



 

0/Post a Comment/Comments